ಮಂಗಳೂರಿನಲ್ಲಿ ‘ಬಿಂದು’ ಜ್ಯುವೆಲ್ಲರಿಯ ಮಳಿಗೆ ಶುಭಾರಂಭ

ಮಂಗಳೂರು: ನಲವತ್ತು ವರ್ಷಗಳಿಂದ ಚಿನ್ನಾಭರಣ ಕ್ಷೇತ್ರದಲ್ಲಿ ಪ್ರಸಿದ್ಧಯಾಗಿ ಕೇರಳದಲ್ಲಿ ಮನೆಮಾತಾಗಿರುವ ಜ್ಯುವೆಲ್ಲರಿಯ ‘ಬಿಂದು’ ಮಂಗಳೂರು ಶೋರೂಂ ಬೆಂದೂರ್‌ ಎಸ್ ಸಿಎಸ್ ಆಸ್ಪತ್ರೆ ಬಳಿ ಅ.19 ರ ಬೆಳಗ್ಗೆ 10 ಕ್ಕೆ ಉದ್ಘಾಟನೆಗೊಳ್ಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಂದು ಜ್ಯುವೆಲ್ಲರಿಯ ಮಾಲಕರಾದ ಅಭಿಲಾಷ್ ಕೆ.ವಿ., ಕೇರಳದಲ್ಲಿ ಜನಪ್ರಿಯವಾಗಿರುವ ನಮ್ಮ ಸಂಸ್ಥೆಯು ಕೆಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಶಾಖೆ ಆರಂಭಿಸಿ ಕರ್ನಾಟಕದಲ್ಲಿ ಚಿನ್ನಾಭರಣ ಮಳಿಗೆಯನ್ನು ಪ್ರಾರಂಭಿಸಿತ್ತು. ಇದೀಗ ಮಂಗಳೂರಿನಲ್ಲಿ ಬಹು ನಿರೀಕ್ಷಿತ ಮಳಿಗೆ ಆರಂಭಕ್ಕೆ ಸಿದ್ದವಾಗಿದ್ದೇವೆ. ಈ ನೂತನ ಶಾಖೆಯಲ್ಲಿ ವಜ್ರ ಹಾಗೂ ಚಿನ್ನಾಭರಣಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.

ದಕ್ಷಿಣ ಭಾರತದ ಪ್ರಖ್ಯಾತ ನಟಿ ಸ್ನೇಹ ಪ್ರಸನ್ನ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ముఖ్య ಅತಿಥಿಯಾಗಿ ಭಾಗವಹಿಸುವರು. ಸಂಸದರು, ಶಾಸಕರು ಸಹಿತ ಹಲವು ಗಣ್ಯರು ನಮ್ಮ ಜತೆಯಾಗುವರು. ಇದೇ ವೇಳೆ ‘ಮೈ ಬ್ಲೂ ಡೈಮಂಡ್’ ಹಾಗೂ ‘ಸ್ವರ್ಣ ಬಿಂದು ಸಿಎಸ್ ಆರ್* ಎಂಬ ಲೋಗೋ ಬಿಡುಗಡೆ ಇದೇ ವೇಳೆ ನಡೆಯಲಿದೆ. ‘ಲೈಟ್ ವೈಟ್ ಜ್ಯುವೆಲ್ಲರಿ’ ಎಂಬ ಬ್ಯಾಂಡ್ ಬಿಂದು ಜ್ಯುವೆಲ್ಲರಿ ಮೂಲಕ ದೊರೆಯಲಿದೆ. ಡೈಮಂಡ್ ವಿಭಾಗದಲ್ಲಿ ಅತ್ಯಾಧುನಿಕ ಹಾಗೂ ನವನವೀನ ಆಭರಣಗಳು ಮಂಗಳೂರು ಶಾಖೆಯಲ್ಲಿ ಸಂಗ್ರಹವಿರಲಿದೆ.

ಕರ್ನಾಟಕದ ಎರಡನೇ ಶೋರೂಂ; ಬೆಂದೂರ್‌ನಲ್ಲಿ ಉದ್ಘಾಟನೆ.

ಬಿಂದು ಜ್ಯುವೆಲ್ಲರಿ-ಶುದ್ಧತೆ, ಶ್ರೇಷ್ಠತೆಯ ಸಂಕೇತ

ಶುದ್ದತೆ, ಶ್ರೇಷ್ಠತೆ ಹಾಗೂ ನಂಬಿಕೆಯ ವಾಗ್ದಾನದೊಂದಿಗೆ  ಬಿಂದು ಜ್ಯುವೆಲ್ಲರಿ ಕೇರಳ, ಕರ್ನಾಟಕದಲ್ಲಿ ಒಂದು ಭವ್ಯ ಪರಂಪರೆಯನ್ನು ಹುಟ್ಟುಹಾಕಿದೆ. ಕಲೆ, ನೈಪುಣ್ಯ ಹಾಗೂ ನಂಬಿಕೆಯ ಬಿಂದು ಪಯಣದಲ್ಲಿ ಸಹಸ್ರ ಸಂಖ್ಯೆಯ ಜನರು ಜತೆಯಾಗಿದ್ದಾರೆ. ಗ್ರಾಹಕರು ಹಾಗೂ ಹಿತೈಷಿಗಳ ಬಂಧ ನಮಗೆ ಹೆಚ್ಚು ಶಕ್ತಿ ಒದಗಿಸಿದೆ. ಇದೇ ಕಾರಣದಿಂದ ಪ್ರಗತಿ ಹಾಗೂ ಪರಂಪರೆಯೊಂದಿಗೆ ಬೆಳೆಯುತ್ತಿರುವ ವಾಣಿಜ್ಯ ನಗರ ಮಂಗಳೂರಿನಲ್ಲಿ ಆಗಮಿಸುತ್ತಿದ್ದೇವೆ. ಸಂಸ್ಕೃತಿ ಹಾಗೂ ವ್ಯಾಪಾರವನ್ನು ಒಟ್ಟಾಗಿ ಬೆಸೆದಿರುವ ಇಲ್ಲಿ ನಮ್ಮ ಸಂಸ್ಥೆಯು ತನ್ನ ಕಲಾತ್ಮಕ ಪರಂಪರೆ, ವೈವಿಧ್ಯಮಯ ವಿನ್ಯಾಸಗಳು ಹಾಗೂ ನಂಬಿಕೆಯ ವಾಗ್ದಾನದೊಂದಿಗೆ ಗ್ರಾಹಕರ ಬಳಿಗೆ ಬರುತ್ತಿದೆ ಎಂದು ಬಿಂದು ಜ್ಯುವೆಲ್ಲರಿಯ ಮಾಲಕರಾದ ಅಭಿಲಾಷ್ ಕೆ.ವಿ. ಹಾಗೂ ಡಾ|ಅಜಿತೇಶ್ ಕೆ.ವಿ. ತಿಳಿಸಿದರು.

 

‘ಅಕ್ಷಯ ನಿಧಿ’, ‘ಸ್ವರ್ಣ ಬಿಂದು’ ಯೋಜನೆ

ಬಿಂದು ಜುವೆಲ್ಲರಿಯಿಂದ ‘ಅಕ್ಷಯ ನಿಧಿ’ ಮತ್ತು ‘ಸ್ವರ್ಣ ಬಿಂದು’ ಮಾಸಿಕ ಉಳಿತಾಯ ಯೋಜನೆಯನ್ನು ಮಂಗಳೂರಿನಲ್ಲಿಯೂ ಪರಿಚಯಿಸಿದೆ. ಈ ಯೋಜನೆ ಮೂಲಕ ಗ್ರಾಹಕರು ಬೋನಸ್ ಮತ್ತು ಇತರ ಲಾಭಗಳನ್ನು ಪಡೆಯಬಹುದು.

 

1981ರಿಂದ ಪಯಣ ಆರಂಭ

 

ಜುವೆಲ್ಲರಿ ಕ್ಷೇತ್ರದಲ್ಲಿ 40 ವರ್ಷಗಳ ಅನುಭವ ಹೊಂದಿರುವ ಸಂಸ್ಥೆಯು ಗ್ರಾಹಕರ ಜತೆ ದೀರ್ಘಾವಧಿಯ ಸಂಪರ್ಕವನ್ನು ಹೊಂದಿದೆ. 1981ರಲ್ಲಿ ಸಂಸ್ಥಾಪಕ ಕೆ.ವಿ. ಕುಂಡ್‌ಕನ್ನನ್ ಪಯಣ ಅವರಿಂದ ಆರಂಭಗೊಂಡಿತ್ತು. ಇದೀಗ ಕರ್ನಾಟಕ ಮತ್ತು ಕೇರಳದ ಗ್ರಾಹಕರಿಗೆ ಚಿನ್ನದ ಪರಿಶುದ್ಧತೆಯ ಬದ್ಧತೆಯೊಂದಿಗೆ

ನವನವೀನ ವಿನ್ಯಾಸವನ್ನು ಒದಗಿಸುವ ಮೂಲಕ ಅವರ ವಿಶ್ವಾಸವನ್ನು ಗಳಿಸಿದೆ. ತಂದೆ ಆರಂಭಿಸಿದ ಈ ಚಿನ್ನಾಭರಣದ ಉದ್ದಿಮೆಯನ್ನು ಮಕ್ಕಳಾದ ತಾವು ಮುಂದುವರಿಸಿಕೊಂಡು ಬಂದಿದ್ದೇವೆ ಎಂದರು.

ಬಿಂದು ಜ್ಯುವೆಲ್ಲರಿ ಮಾಲಕಡಾ|ಅಜಿ ತೇಶ್ ಕೆ.ವಿ., ಹಿರಿಯ ವ್ಯವಸ್ಥಾಪಕ ಸುನಿಲ್ ರಾಜ್ ಶೆಟ್ಟಿ ಪ್ರಮುಖರಾದ ಸಂತೋಷ್ ಉಪಸ್ಥಿತರಿದ್ದರು


Poll 

आप अपने सहर के वर्तमान बिधायक के कार्यों से कितना संतुष्ट है ?

View Results

Loading ... Loading ...


Related Articles

Check Also
Close